"ವಿದ್ಯುತ್ ದೀಪ: ಶೀಘ್ರ ದುರಸ್ತಿಗೆ ನಿವಾಸಿಗಳ ಆಗ್ರಹ"
ವರದಿ: ತೆಳ್ಳನೂರು ಗುರುರಾಜ್
ಕೆಟ್ಟು ನಿಂತು ಹೋಗಿರುವ ಹೈಮಾಸ್ಟ್ ವಿದ್ಯುತ್ ದೀಪ ರಿಪೇರಿಗೆ ನಿವಾಸಿಗಳ ಅಗ್ರಹ.
ಸಂತೇಮರಹಳ್ಳಿ : ಸಮೀಪದ ತೆಳ್ಳನೂರು ಗ್ರಾಮದ ಕುರುಬರ ಬೀದಿಯಲ್ಲಿರುವ ಹೈಮಾಸ್ಟ್ ಬೀದಿ ದೀಪ ಕೆಟ್ಟು ನಿಂತು ತಿಂಗಳಾದರೂ ರಿಪೇರಿಯಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈಮಾಸ್ಟ್ ವಿದ್ಯುತ್ ದೀಪ ಕೆಟ್ಟು ನಿಂತು ತಿಂಗಳಾದರು ರಿಪೇರಿ ಮಾಡಿಲ್ಲ ಎಂದು ತೆಳ್ಳನೂರು ಗ್ರಾಮದ ಕುರುಬರ ಬೀದಿಯ ನಿವಾಸಿಗಳು ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಮದ್ಯದಲ್ಲಿ ಹೈಮಾಸ್ಟ್ ಈ ವಿದ್ಯುತ್ ದೀಪ ಅಳವಡಿಸಿರುವುದರಿಂದ ರಾತ್ರಿ ಪೂರ್ತಿ ಬೆಳಕಿನ ವಾತಾವರಣ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡಿಯುವುದಿಲ್ಲ ಎಂದು ಅಲ್ಲಿನ ನಿವಾಸಿ ನಾಗೇಶ್ ತಿಳಿಸಿದರು.
ಸಂಬಂಧ ಪಟ್ಟ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಹೈಮಾಸ್ಟ್ ದೀಪವನ್ನು ರಿಪೇರಿ ಮಾಡಿಸಿ
ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ